ಜ್ಞಾನಕೋಶ

ವ್ಯಕ್ತಿ ವಿಚಾರ

'ಕನ್ನಡ ನವೋದಯದ ಕಾರ್ಯ ಪ್ರವರ್ತಕ', 'ಕನ್ನಡದ ಕಣ್ವ', 'ಕರ್ನಾಟಕದ ಆಚಾರ್ಯ ಪುರುಷ' ಎಂದು ಖ್ಯಾತನಾಮರಾದ ಬಿ.ಎಂ.ಶ್ರೀ. (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ) ಅವರು ಕನ್ನಡ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಡುವುದರ ಮೂಲಕ ಹೊಸಗನ್ನಡ ಸಾಹಿತ್ಯವನ್ನು ಸೃಷ್ಟಿಸಿದವರು.

ಹತ್ತೊಂಬತ್ತನೆಯ ಶತಮಾನದಿದಂದ ಕನ್ನಡ ಸಾಹಿತ್ಯ ರಚನೆಯಲ್ಲಿ ಜಡಗಟ್ಟಿ ಅರ್ಥಹೀನವಾಗಿದ್ದ, ಸಾಂಪ್ರದಾಯಿಕ ಲಕ್ಷಣಗಳಿಗೆ ಕಟ್ಟುವಿದ್ದು ಶುಷ್ಕವಾಗಿದ್ದ ಸಂದರ್ಭದಲ್ಲಿ, ಶ್ರೀಯವರು ಬರೆದ 'ಇಂಗ್ಲೀಷ್ ಗೀತಗಳು' ಕೃತಿ ಕನ್ನಡದ ನವೋದಯ ಕಾವ್ಯ ಯುಗಕ್ಕೆ ನಾಂದಿ ಹಾಡಿತು. ಅವರು 1915 ರಿಂದ ಬಿಡಿ ಬಿಡಿಯಾಗಿ ಬರೆದುಕೊಂಡು ಬಂದಿದ್ದ ಅನುವಾದಿತ ಮತ್ತು ಸ್ವತಂತ್ರ ಕವನಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಮೊತ್ತ ಮೊದಲು 'ಶ್ರೀ' ಎಂಬ ಕಾವ್ಯನಾಮದೊದಂದಿಗೆ 1926ರಲ್ಲಿ ಪ್ರಕಟಿಸಿತು.