ವಿಷಯ ಟ್ಯಾಗ್ 6 ವಿಷಯಗಳು

# ನಾಟಕಗಳು Plays

ಭಾಷಾ ಆಯ್ಕೆ / Display:

ಜ್ಞಾನಕೋಶ

3
ಡಾ|| ಚಂದ್ರಶೇಖರ ಕಂಬಾರ
vyaktivichara

ಡಾ|| ಚಂದ್ರಶೇಖರ ಕಂಬಾರ

ಕನ್ನಡ ಸಾಹಿತ್ಯದಲ್ಲಿ ನವ್ಯದ ಕಹಳೆ ಜೋರಾಗಿ ಮೊಳಗುತ್ತಿದ್ದ ಅರವತ್ತರ ದಶಕದಲ್ಲಿ, ಉತ್ತರ ಕರ್ನಾಟಕದಿಂದ ಮೂಡಿಬಂದ ಕಾವ್ಯ ಧ್ವನಿಗಳಲ್ಲಿ ಡಾ|| ಚಂದ್ರಶೇಖರ ಕಂಬಾರರ ಹೆಸರು ಪ್ರಮುಖವಾದದ್ದು.

ಭಾರತೀಯ ಜ್ಞಾನಪೀಠವು ಡಾ. ಚಂದ್ರಶೇಖರ ಕಂಬಾರರಿಗೆ, ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೨೦೧೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.

vyaktivichara

ಟಿ. ಪಿ. ಕೈಲಾಸಂ

ಆಧುನಿಕ ಕನ್ನಡ ನಾಟಕ ಕ್ಷೇತ್ರಕ್ಕೆ ಟಿ. ಪಿ. ಕೈಲಾಸಂ ಅವರ ಕೊಡುಗೆ ಅಪಾರ, ಅದಕ್ಕಾಗಿಯೆ ಅವರನ್ನು 'ಕರ್ನಾಟಕ ಪ್ರಹಸನ ಪಿತಾಮಹ' ಎಂದು ಕರೆಯುತ್ತಾರೆ.

vyaktivichara

ಗಿರೀಶ್ ಕಾರ್ನಾಡ್

ಜ್ಞಾನಪೀಠ ಪ್ರಶಸ್ತಿ ಪಡೆದ ಏಳನೇಯ ಕನ್ನಡಿಗ ಹಾಗೂ ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರು ಗಿರೀಶ್ ಕಾರ್ನಾಡರು. ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡರು ಕನ್ನಡದಲ್ಲಿ ಹೊಸ ಅಲೆಯ ನಾಟಕಗಳನ್ನು ರಚಿಸಿ, ರಂಗಪ್ರಯೋಗ ಮಾಡಿದ್ದಲ್ಲದೆ, ನಾಟಕ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಅನೇಕ ಕಲಾತ್ಮಕ ಚಿತ್ರಗಳಲ್ಲಿ ಅಭಿನಯ, ಚಿತ್ರಕಥೆ, ಸಂಭಾಷಣೆ ನೀಡಿ ಅನೇಕ ಪ್ರಶಸ್ತಿ ಗೌರವಗಳಿಗೆ ಭಾಜನದಾಗಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ನಿರ್ದೇಶನ ಕೂಡ ಮಾದಿದ್ದಾರೆ. ದೂರದರ್ಶನದ ಧಾರಾವಾಹಿಗಳಲ್ಲಿ ಅಭಿನಯಿಸಿ, ನಿರ್ದೇಶಿಸಿ ಜನಪ್ರಿಯತೆ ಗಳಿಸಿದ್ದಾರೆ.

ದಿನ ವಿಶೇಷ ಘಟನೆಗಳು

1
1927 ಸಂಸ್ಕೃತಿ

ನೀಲ್ ಸೈಮನ್ ಜನ್ಮದಿನ: ಅಮೆರಿಕನ್ ರಂಗಭೂಮಿಯ ಪ್ರಸಿದ್ಧ ನಾಟಕಕಾರ

ಜುಲೈ 4, 1927 ರಂದು ಜನಿಸಿದ ನೀಲ್ ಸೈಮನ್, ಅಮೆರಿಕದ ಅತ್ಯಂತ ಯಶಸ್ವಿ ನಾಟಕಕಾರರಲ್ಲಿ ಒಬ್ಬರು. 'ದಿ ಆಡ್ ಕಪಲ್' ಮತ್ತು 'ಬೇರ್‌ಫೂಟ್ ಇನ್ ದಿ ಪಾರ್ಕ್' ನಂತಹ ಅವರ ಹಾಸ್ಯಮಯ ಮತ್ತು ಮಾನವೀಯ ನಾಟಕಗಳು ಬ್ರಾಡ್‌ವೇಯಲ್ಲಿ ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದವು.