# ವ್ಯಾಕರಣ Vyakarana
ಜ್ಞಾನಕೋಶ
5
ಅವ್ಯಯಗಳು
ಕನ್ನಡ ವ್ಯಾಕರಣದಲ್ಲಿ "ಅವ್ಯಯಗಳು" ಒಂದು ಪ್ರಮುಖ ಭಾಗವಾಗಿದೆ. ಭಾಷೆಯಲ್ಲಿ ಪದಗಳು ತಮ್ಮ ಲಿಂಗ, ವಚನ, ಮತ್ತು ವಿಭಕ್ತಿಗಳಿಗೆ ಅನುಗುಣವಾಗಿ ರೂಪಾಂತರಗೊಳ್ಳುತ್ತವೆ. ಆದರೆ, ಕೆಲವು ಪದಗಳು ಯಾವುದೇ ಬದಲಾವಣೆಯಿಲ್ಲದೆ ವಾಕ್ಯದಲ್ಲಿ ಒಂದೇ ರೂಪದಲ್ಲಿ ಬಳಕೆಯಾಗುತ್ತವೆ. ಇಂತಹ ಪದಗಳೇ 'ಅವ್ಯಯಗಳು'. ಇವುಗಳನ್ನು 'ಅವಿಕಾರಿ ಪದಗಳು' ಎಂದೂ ಕರೆಯುತ್ತಾರೆ.
ಲೇಖನ ಚಿಹ್ನೆಗಳು
ಬರವಣಿಗೆಯ ಮೂಲಕ ಪ್ರಕಟವಾಗುವ ಆಲೋಚನೆ ಅಭಿಪ್ರಾಯಗಳಲ್ಲಿ ಅರ್ಥೈಸಲು ವಾಕ್ಯ ಮತ್ತು ವಾಕ್ಯ ಭಾಗಗಳ ಉಚಿತವಾದ ಎಡೆಗಳಲ್ಲಿ ಕಲ್ಪಿಸುವ ವಿರಾಮಸ್ಥಾನಗಳ ಲಿಖಿತಸಂಕೇತಗಳೇ ಲೇಖನ ಚಿಹ್ನೆಗಳು. ಲೇಖನ ಚಿಹ್ನೆಗಳಿಲ್ಲದಿದ್ದಲ್ಲಿ ವಾಕ್ಯಗಳ ಅರ್ಥ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಬರೆಯುವಾಗ ಸರಿಯಾದ ಚಿಹ್ನೆಗಳನ್ನು ಬಳಸುವುದರಿಂದ, ಓದುಗನು ಬರವಣಿಗೆಯ ಸರಿಯಾದ ಅರ್ಥವನ್ನು ಗ್ರಹಿಸಬಹುದಲ್ಲದೆ, ಸರಿಯಾದ ರೀತಿಯಲ್ಲಿ ವಾಚನವನ್ನು ಮಾಡಬಹುದು.
ಮಹಾಕವಿ ರನ್ನ
ಹತ್ತನೆಯ ಶತಮಾನದಲ್ಲಿದ್ದ ರನ್ನ ಕರ್ನಾಟಕದ ಒಬ್ಬ ಹೆಮ್ಮೆಯ ಕವಿ. ಕವಿತ್ರಯರಲ್ಲಿ ಒಬ್ಬನಾದ ರನ್ನ ಬಿಜಾಪುರ ಜಿಲ್ಲೆಯ ಮುದುವೊಳಲಿನಲ್ಲಿ ಜನಿಸಿದನು. ಚಕ್ರವರ್ತಿಯ ಪ್ರೊತ್ಸಾಹದಿಂದ ರನ್ನನು ಕಾವ್ಯ ರಚನೆ ಮಾಡಿದನು. ತನ್ನ ಆಶ್ರಯದಾತನ ಕೀರ್ತಿಯನ್ನು ಬೆಳಾಗಿಸಲೆಂದು ಮಹಾಭಾರತದ ವೀರನಾದ ಭೀಮನೊಡನೆ ಅವನನ್ನು ಸಮೀಕರಿಸಿ, 'ಸಾಹಸಭೀಮವಿಜಯ' ಎಂಬ ಚಂಪೂ ಕಾವ್ಯವನ್ನು ರಚಿಸಿದನು. ಇದನ್ನು 'ಗದಾಯುದ್ಧ'ವೆಂದೇ ಕರೆಯುವುದು ರೂಢಿ. ಕಾವ್ಯವನ್ನು ಕೇಳಿ ಆನಂದಿಸಿದ ದೊರೆಯು ಅವನಿಗೆ 'ಕವಿಚಕ್ರವರ್ತಿ' ಎಂಬ ಬಿರುದನ್ನು ಕೊಟ್ಟನು.
ಅಲಂಕಾರಗಳು: ಶಬ್ದಾಲಂಕಾರ
ಮನುಷ್ಯ ಉಡುಗೆ ತೊಡುಗೆಗಳಿಂದ ಹೇಗೆ ತನ್ನ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾನೆಯೋ, ಹಾಗೇಯೇ ಮಾತನಾಡುವಾಗ ಕೇಳುಗರನ್ನು ಆಕರ್ಷಿಸಲು, ಹರ್ಷಿಸಲು, ವಿಷಯವನ್ನು ಮನದಟ್ಟು ಮಾಡಲು ಶಬ್ದಗಳನ್ನು ಕಿವಿಗೆ ಇಂಪಾಗುವಂತೆ, ಅರ್ಥ ಹೆಚ್ಚಿಸುವಂತೆ ಚಮತ್ಕಾರಿಕ ರೀತಿಯಲ್ಲಿ ಬಳಸುವುದು ರೂಡಿ. ಇದಕ್ಕೆ ಭಾಷೆಯ ಅಲಂಕಾರಗಳೆನ್ನುತ್ತಾರೆ. ಅಲಂಕಾರಗಳು ಕಾವ್ಯದ, ಗದ್ಯದ ಸೊಬಗನ್ನು ಹೆಚ್ಚಿಸುವುದಲ್ಲದೆ, ಕೇಳುಗರ ಗಮನವನ್ನು ಸೆಳೆಯುವಂತೆ ಮಾಡುತ್ತದೆ. ಕಾವ್ಯಗಳಲ್ಲಿ ಕವಿಗಳು ಶಬ್ದಗಳ ಜೋಡಣೆಯ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದ್ದರೆ ಅಂತಹವನ್ನು 'ಶಬ್ದಾಲಂಕಾರ'ಗಳೆನ್ನುವರು.
ದೇಶ್ಯ - ಅನ್ಯದೇಶ್ಯ ಶಬ್ದಗಳು
ಕನ್ನಡದಲ್ಲಿಯೂ ಬೇರೆ ಭಾಷೆಗಳಿಂದ ಅನೇಕ ಶಬ್ದಗಳು ಬಂದು ಸೇರಿವೆ, ಸೇರುತ್ತಲಿವೆ. ಹಾಗೆಯೇ ಕನ್ನಡದ ಅನೇಕ ಶಬ್ದಗಳು ಬೇರೆ ಭಾಷೆಯಲ್ಲಿ ಸೇರಿವೆ. ಅಚ್ಚಗನ್ನಡ ಶಬ್ದಗಳನ್ನು 'ದೇಶ್ಯ' ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು 'ಅನ್ಯದೇಶ್ಯ' ಶಬ್ದಗಳೆನ್ನುತ್ತೇವೆ.