ಧಾರವಾಡ ಜಿಲ್ಲೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ. ಇದಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದೆ.
ಧಾರವಾಡ ಎಂದಾಕ್ಷಣ ನೆನಪಿಗೆ ಬರುವುದು ಹಾಲಿನಿಂದ ಮಾಡಲ್ಪಡುವ ಸಿಹಿ ತಿನಿಸು - "ಧಾರವಾಡ ಪೇಡ"
ಧಾರವಾಡ ಶಬ್ಧದ ಅರ್ಥ, ಸುಧೀರ್ಘ ಪ್ರವಾಸದಲ್ಲಿ ಪಡೆಯುವ ಸಣ್ಣ ವಿಶ್ರಾಮ ಅಥವಾ ಸಣ್ಣ ವಿಶ್ರಾಂತಿಧಾಮ ಆಗಿದೆ. ಮೂಲತಃ ಧಾರವಾಡ ಶಬ್ಧವು ಸಂಸ್ಕೃತದ "ದ್ವಾರವಾಟ" ಶಬ್ದದಿಂದ ಬಂದಿದೆ. ಸಂಸ್ಕೃತದಲ್ಲಿ "ದ್ವಾರ" ಎಂದರೆ "ಬಾಗಿಲು" ಮತ್ತು "ವಾಟ" ಎಂದರೆ "ಊರು". ಬಹಳ ಕಾಲದಿಂದಲೂ ಧಾರವಾಡವು ಮಲೆನಾಡು ಮತ್ತು ಬಯಲು ಪ್ರದೇಶಗಳಿಗೆ ರಹದಾರಿಯಾಗಿರುವುದರಿಂದ ಈ ಹೆಸರು ಸೂಕ್ತವಾಗಿದೆ.
ಸತ್ಯಾಸತ್ಯಗಳ ಮಧ್ಯೆ ಇಡೀ ಜಗತ್ತನ್ನೆ ಇಡುವಷ್ಟು ಅಂತರವಿದೆ.