ನರನಾದ ಮೇಲೆ

ಪುರಂದರ ದಾಸರು

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು || ಪ ||

ಭೂತ ದಯಾಪರನಾಗಿರಬೇಕು

ಪಾತಕವೆಲ್ಲ ಕಳೆಯಲು ಬೇಕು

ಮಾತು ಮಾತಿಗೆ ಹರಿಯೆನ್ನಬೇಕು || ೧ ||

ಆರು ವರ್ಗ ನಳಿಯಬೇಕು

ಮೂರು ಗುಣಗಂಗಳ ಮೀರಲು ಬೇಕು

ಸೇರಿ ಬ್ರಹ್ಮನೊಳಿರಬೇಕು || ೨ ||

ಭೇದಹಂಕಾರವ ನೀಗಲುಬೇಕು

ಮಾಧವ ಸ್ಮರಣೆಯೊಳಿರಬೇಕು

ಅಷ್ಟ ಮದಂಗಳ ತಿಳಿಯಲುಬೇಕು || ೩ ||

ದುಷ್ಟರ ಸಂಗವ ಬಿಡಲುಬೇಕು

ಕೃಷ್ಣ ಕೇಶವ ಎನ್ನಬೇಕು

ವೇದ ಶಾಸ್ತ್ರವನೋದಲುಬೇಕು || ೪ ||

ಶಾಂತಿ ಕ್ಷೇಮ ದಯೆ ಪಿಡಿಯಲು ಬೇಕು

ಭ್ರಾಂತಿ ಕ್ರೋಧವ ಕಳೆಯಲು ಬೇಕು

ಸಂಗದಿ ರತಿಯಿರಬೇಕು || ೫ ||

ಗುರುವಿನ ಚರಣಕ್ಕೆರಗಲು ಬೇಕು

ಶರಣೋಪಾಯವರಿಯಬೇಕು

ವಿರಕ್ತಿ ಮಾರ್ಗದಲಿರಬೇಕು || ೬ ||

ಬಂದದ್ದುಂಡು ಸುಖಿಸಲು ಬೇಕು

ನಿಂದಾಸ್ತುತಿಗಳ ತಾಳಲು ಬೇಕು

ತಂದೆ ಪುರಂದರ ವಿಠಲನ ನೆನೆಯಬೇಕು || ೭ ||

ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!