ಡಾ|| ರಾಜ್ ಕುಮಾರ್, ಎಸ್. ಜಾನಕಿ
ಚಿ. ಉದಯಶಂಕರ್
ಟಿ. ನಿಜಲಿಂಗಪ್ಪ

ಶೃತಿ ಸೇರಿದೆ ಹಿತವಾಗಿದೆ

ಮಾತೆಲ್ಲವು ಇಂಪಾಗಿದೆ|| ಪ ||

ಹೊಸರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ

ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ

ಹೊಸ ನೋಟವು ಕಣ್ತುಂಬಿ ಹೊಸ ರೀತಿಯ ತಂಪಾಗಿದೆ

ಬದುಕೆಲ್ಲಾ ಹಸಿರಾಗಿ ಒಲವೊಂದೇ ಉಸಿರಾಗಿ|| 1 ||

ಮಳೆಗಾಲವು ಬಂದಾಗಿದೆ ನೆಲವೆಲ್ಲ ಹಸಿರಾಗಿದೆ

ಚಳಿಗಾಲವು ಕಂಡಾಗಿದೆ ಮಂಜಿನ ತೆರೆ ಹಾಸಿದೆ

ಋತು ಚಕ್ರವು ಉರುಳಿರಲು ಬಾಳೆಂಬುವ ಬಂಡಿಯಲಿ

ಹೊಸದೊಂದು ಮೊಗ್ಗಾಗಿ ಸಂಸಾರದ ಬೆಳಕಾಗಿ|| 2 ||

ಶೃತಿ ಸೇರಿದಾಗ

ಚಿತ್ರ ನೋಡಿ