ಲೋಕದ ಕಾಳಜಿ ಮಾಡತೇನಂತಿ

ಶಿಶುನಾಳ ಶರೀಫ

ಲೋಕದ ಕಾಳಜಿ ಮಾಡತೇನಂತಿ ನೀ

ಯಾರು ಬ್ಯಾಡಾಂತಾರ ಮಾಡಪ್ಪ ಚಿಂತಿ ||

ನೀ ಮಾಡೋದು ಘಳಿಗಿ ಸಂತಿ

ಮೇಲು ಮಾಳಗಿ ಕಟ್ಟಬೇಕಂತಿ

ಆನೆ ಅಂಬಾರಿ ಏರಬೇಕಂತಿ

ಮಣ್ಣಲಿ ಇಳಯೊದ ಥಣ್ಣಗ ಮರತಿ ||

ಬದುಕು ಬಾಳೆವು ನಂದೆ ಅಂತೀ

ನಿಧಿ ಸೇರಿದಷ್ಟೂ ಸಾಲದು ಅಂತಿ

ಕದವ ತೆರೆದು ಕಡೆಯಾತ್ರೆಗೆ ನಡೆವಾಗ

ಒದಗದು ಯಾವುದೋ ಸುಮ್ಮನೆ ಅಳತಿ ||

ನೆಲೆಯು ಗೊವಿಂದನ ಪಾದದೋಳೈತಿ

ಅಲಕೊಂಡು ಹುಡುಕಿದರಿನ್ನೆಲ್ಲೈತಿ?

ಶಿಶುನಾಳುಧೀಶನ ದಯೆಯೊಳಗೈತಿ

ರಸಿಕನು ಹಾಡಿದ ಕವಿತೆಯೊಳೈತಿ ||