ಹಾಕಿದ ಜನಿವಾರವ

ಶಿಶುನಾಳ ಶರೀಫ

ಹಾಕಿದ ಜನಿವಾರವ ಸದ್ಗುರುನಾಥ

ಹಾಕಿದ ಜನಿವಾರವ

ಹಾಕಿದ ಜನಿವಾರವ ನೂಕಿದ ಭವಭಾರ

ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು ||

ಸಂಧ್ಯಾವಂದನೆ ಕಲಿಸಿ ಆನಂದದಿ

ಬಿಂದು ವರ್ಗವ ನಿಲಿಸಿ

ನಂದಿಸಿ ಮನಸನು ಆತ್ಮ ಜಲದಲಿ

ಎಂದೆಂದಿಗೂ ಯಮದುಂದುಗವಳಿಯೆಂದು ||

ಕಂಡ ಕಂಡವರೊಡನೆ ಅಲೆದಿ

ಧರ್ಮಲಂದ ರಜತೆ ಯಾಕೆ ಬೆರದಿ?

ಪುಂಡ ನಿತನ ನೂಕು ಎಂದು ನಿಂದಿಸೆ

ಗುರುಗಂಡೆಂದರೀತನೆ ನೀವಲ್ಲಛೀ ಎಂದು ||

ಶಿಶುನಾಳಧೀಶ ಗುರು ತನ್ನೊಡಲೊಳು

ವಶವಾದ ಸೂತ್ರವನು

ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ

ಉಸುರಿದ ಮಂತ್ರವ ಹೊಸಬನ ಮೂಡುತ ||