ಸುಖ ಎಲ್ಲಾರಿಗೆಲ್ಲೈತವ್ವ

ಜಾನಪದ

ಸುಖ ಎಲ್ಲಾರಿಗೆಲ್ಲೈತವ್ವ

ದುಃಖ ತುಂಬ್ಯಾದೆ ಮರುತ್ಯಾದ ಮ್ಯಾಲೆ

ತಾ ಮಾಡಿದ ಪಾಪ ತಾ ಕಳೆಯಬೇಕ

ಶಿವನ ಮ್ಯಾಲ್ಯಾಕ ಸಿಟ್ಟಾಗಬೇಕ ||

ಸತ್ಯವಂತನಾದ ಹರಿಶ್ಚಂದ್ರ ರಾಜಾ

ಹೆಂಡತಿ ಮಕ್ಕಳ ಮಾರಿ ಋಣವ ತೀರಿಸಿದ

ಹೊಲೆಯಗೆ ಹಾಳಾಗಿ ಸುಡುಗಾಡ ಕಾಯ್ದ ||

ತಂದೆ ಮಾತಿಗಾಗಿ ಶ್ರೀರಾಮಚಂದ್ರ

ಹದಿನಾಲ್ಕು ವರುಷ ವನವಾಸಕ್ಹೋದ

ಸೀತೆಯ ಕಳಕೊಂಡು ಬಲು ಕಷ್ಟಪಟ್ಟ ||

ಕೌರವರ ಮೋಸಾದಿ ಪಂಚಪಾಂಡವರು

ರಾಜ್ಯ ಕೋಶ ಬಿಟ್ಟು ಬವಣೆ ಪಟ್ಟರು

ಅಪಮಾನಗಳನೆಲ್ಲಾ ಸೈರಿಸಿಕೊಂಡರು ||