ಮಾನವ ಜನ್ಮ ದೊಡ್ಡದು

ಪುರಂದರ ದಾಸರು

ಮಾನವ ಜನ್ಮ ದೊಡ್ಡದು

ಇದ ಹಾನಿ ಮಾಡಲು ಬೇಡಿ

ಹುಚ್ಚಪ್ಪಗಳಿರಾ || ಪ ||

ಕಣ್ಣು ಕೈ ಕಾಲ್ ಕಿವಿ ನಾಲಿಗೆ

ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ

ಹೆಣ್ಣು ಮಾಣ್ಣಿಗಾಗಿ

ಹರಿಯ ನಾಮಾಮೃತ ಉಣ್ಣದೆ

ಉಪವಾಸ ಇರುವರೆ ಖೋಡಿ || ೧ ||

ಕಾಲನ ದೂತರು ಕಾಲ್ಪಿಡಿದೆಳೆವಾಗ

ತಾಳು ತಾಳೆಂದರೆ ಕೇಳುವರೆ

ಧಾಳಿ ಬಾರದ ಮುನ್ನ

ಧರ್ಮವ ಗಳಿಸಿರೊ

ಸುಳ್ಳಿನ ಸಂಸಾರ ಸುಳಿಗೆ

ಸಿಕ್ಕಲು ಬೇಡಿ || ೨ ||

ಏನು ಕಾರಣ ಯದು

ಪತಿಯನು ಮರೆತಿರಿ

ಧನಧಾನ್ಯ ಪುತ್ರರು ಕಾಯುವರೆ

ಇನ್ನಾದರು ಏಕೋ ಭಾವದಿ ಭಜಿಸಿರೋ

ಚೆನ್ನ ಶ್ರೀ ಪುರಂದರ ವಿಠಲ ರಾಯನ || ೩ ||