ಯಾವ ಮೋಹನ ಮುರಳಿ ಕರೆಯಿತು

ರಾಜು ಅನಂತಸ್ವಾಮಿ, ಸಂಗೀತ ಕಟ್ಟಿ ಗೋಪಾಲಕೃಷ್ಣ ಅಡಿಗ ಮನೋ ಮೂರ್ತಿ

ಯಾವ ಮೋಹನ ಮುರಳಿ ಕರೆಯಿತು

ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು

ನಿನ್ನ ಮಣ್ಣಿನ ಕಣ್ಣನು || ಪ ||

ಹೂವು ಹಾಸಿಗೆ ಚಂದ್ರ ಚಂದನ

ಬಾಹು ಬಂಧನ ಚುಂಬನ

ಬಯಕೆ ತೋಟದ ಬೇಲಿಯೊಳಗೆ

ಕರಣ ಗಣದೀ ರಿಂಗಣ

ಸಪ್ತ ಸಾಗರದಾಚೆ ಎಲ್ಲೊ

ಸುಪ್ತ ಸಾಗರ ಕಾದಿದೆ

ಮೊಳೆಯ ದಲೆಗಳ ಮೂಕ ಮರ್ಮರ

ಇಂದು ಇಲ್ಲಿಗೂ ಹಾಯಿತೆ?

ವಿವಶವಾಯಿತು ಪ್ರಾಣ - ಹಾ

ಪರವಶವು ನಿನ್ನೀ ಚೇತನ

ಇರುವುದೆಲ್ಲವ ಬಿಟ್ಟು

ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಳಿ ಕರೆಯಿತು

ಇದ್ದಕಿದ್ದಲೇ ನಿನ್ನನು

ಯಾವ ಬೃಂದಾವನವು ಚಾಚಿತು

ತನ್ನ ಮಿಂಚಿನ ಕೈಯನು